Slide
Slide
Slide
previous arrow
next arrow

ಗಾಯತ್ರೀ ನಗರದಲ್ಲಿ ರಸ್ತೆ ಮೇಲೆ ನೀರು; ಸಂಚಾರಕ್ಕೆ ಸಮಸ್ಯೆ

300x250 AD

ಶಿರಸಿ: ನಗರದ ಬನವಾಸಿ ರಸ್ತೆಗೆ ಹೊಂದಿಕೊಂಡಿರುವ ಗಾಯತ್ರಿ ನಗರದ 5ನೇ ಅಡ್ಡರಸ್ತೆಯಲ್ಲಿ ವಿಪರೀತ ಮಳೆ ಪರಿಣಾಮ ರಸ್ತೆಗಳಲ್ಲಿ ಗುರುವಾರ ರಾತ್ರಿ ನೀರು ತುಂಬಿ ನಿಂತ ಕಾರಣ, ಸಂಚಾರಕ್ಕೆ ತೀವ್ರ ಅಡಚಣೆಯಾದ ವರದಿಯಾಗಿದೆ.

23 ನೇ ವಾರ್ಡ್ ವ್ಯಾಪ್ತಿಯಲ್ಲಿ ಬರುವ ಈ ಪ್ರದೇಶ, ಶ್ರೀನಗರಕ್ಕೆ ಸಾಗುವ ಸಂಪರ್ಕವನ್ನೂ ಈ ರಸ್ತೆ ಹೊಂದಿರುವುದರಿಂದ ಸುಮಾರು 400 ಕ್ಕೂ ಅಧಿಕ ಮನೆಗಳಿಗೆ ಸಾಗುವ ಸಂಚಾರಕ್ಕೆ ಅಡ್ಡಿಯಾಗಿದ್ದು, ನಗರಸಭೆ ಈ ನಿಟ್ಟಿನಲ್ಲಿ ಸೂಕ್ತ ಗಮನ ಹರಿಸಬೇಕು. ಹೆಚ್ಚಾಗಿ ವಯೋವೃದ್ಧರೇ ನೆಲಸಿರುವ ಈ ಪ್ರದೇಶದ ಬಗ್ಗೆ ಸಂಬಂಧಪಟ್ಟವರು ಹೆಚ್ಚು ಗಮನ ಹರಿಸಬೇಕು ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top